Posts

ಹೂಗಳ ತಂದಿಹೆ...

Image
  ಹೂಗಳ ತಂದಿಹೆ...  ಹೊನ್ನಿನ ಬೆಳಕಿನ ಬೆಳಗಿನ ಜಾವದಿ ನಿನ್ನನಗಲಿ ನಾ ನಡೆದಿದ್ದೆ, ಇನ್ನು ಬರುವೆನೆಂದುಲಿದಿದ್ದೆ. ಹೊರಟಿರಲೆನ್ನೊಡನಡಿಗಳನಿಕ್ಕುತ  ಹರದಾರಿಯ ನೀ ಸವೆಸಿದ್ದೆ, ವಿರಹದ ಕೊರಗನ್ನು ತರಿಸಿದ್ದೆ.  ಮರಳಿರೆ ನಾ ಗೋಧೂಳಿಯ ಸಮಯದಿ ಗುರುತಿರದಾಯಿತೆ ನಿನಗೆನದು? ಬಳಲಿಹೆನಲೆದಾಡುತ ನಾ ದಿನವೂ - ಮಳಲಿನ ಮಣ್ಣಿನ ಕೊಳೆಯಿಹುದು.  ಮಾತಿರದಾಗಿದೆ, ಹೇತುವದೇನಿದೆ? ಪರಿಚಯವಳಿದಿಹುದರ ಫಲವೊ? ಗುರುತಿಹುದರ ಪರಿಣಾಮವದೊ? ನನಗೊಬ್ಬನಿಗೇಕೀ ಆಕ್ಷೇಪಣೆ? ವನಸುಮಗಳಿಗೇತಕೆ ಸಲ್ಲ? ಬಾಡಿದ ಹೂಗಳ ನಾನೈತಂದಿಹೆ, ಬೇಡಿಕೆಯದರೆಡೆಗೇಕಿಲ್ಲ? ಮಲರುಗಳೆನ್ನನು ನಿನ್ನೆಡೆಯಿಂದಲಿ  ಬಲುದೂರಾಗಿಸುತಿವೆಯಲ್ಲ! ಹಗಲೊಂದರ ಕೆಲ ಗಳಿಗೆಗಳಗಲಿಕೆ  ಯುಗಗಳೆ ಕಳೆದಂತಿಹುದಲ್ಲ! ಒಲವಿನಲರುಗಳ ನಿನಗೊಪ್ಪಿಸುತಿಹೆ  ಬೆಲೆಯನು ಪರಿಗಣಿಸುತ ಸಲಹು, ಕಲೆಹಾಕಲು ನಾ ದೂರಾಗಿದುದರ  ಫಲವನಳೆಯಲದುವೇ ಕುರುಹು. Original: Flower-Gathering I left you in the morning, And in the morning glow, You walked a way beside me To make me sad to go. Do you know me in the gloaming, Gaunt and dusty grey with roaming? Are you dumb because you know me not, Or dumb because you know? All for me? And not a question For the faded flowers gay That could take ...

ಕೈಮರ

Image
  ಕೈಮರ ಕಾರಿರುಳೆಲ್ಲೆಡೆ, ನೇಸರನಿಳಿದಿಹ  ಮಾಸಲು ಗಿರಿಗಳ ಹಿಂಬದಿಗೆ, ಬಾನಲಿ ಕಾಣಿಸವರಿಲುಗಳೊಂದೂ ಬೆಳಗಲು ಬೆಳ್ಳಿಯ ಮುಗುಳುನಗೆ. ಗೂಗೆಯು ಹಾರಿತು ಬಯಲನು ಹಾಯುತ  ಕೂಗನು ಬಿರುಗಾಳಿಗೆ ಬೆರೆಸಿ, ಮಂಕದು ಕವಿದಿರೆ ಪುಟ್ಟನು ನಡೆದನು  ಬಿರುಸಿನ ಹೆಜ್ಜೆಯ ಹಾಕುತಲಿ. ಆ ಕಗ್ಗತ್ತಲಿನೊಳು ನಡುನಡುವೆಯೆ  ಮಿಂಚಿನ ತಾಂಡವ ನಡೆದಿತ್ತು, ಕೆಸರಿನ ಜಾಡನು ತೋರಿತ್ತು, ಬೇಲಿಯ ನೆರಳೂ ಕಂಡಿತ್ತು! ಭೀಕರ ಕಾವಳ ಕವಿದಿರೆ ಪಥವನು  ತಡಕಾಡುತಲವ ಹುಡುಕಿದನು, ಘೋರದ ರೂಪವನೊಂದನು ದೂರದಿ  ಕಂಡಂತೆನಿಸಿಯೆ ಬೆದರಿದನು. ಮಾರಕವೆನಿಸುವ ಭೀಕರ ಕಾಯವು  ಬಿಳಿಯುಡುಪನು ತಾ ಹೊದ್ದಿತ್ತು, ಪುಟ್ಟನ ಜುಟ್ಟನು ಹಿಡಿದೆಳೆದಾಡಲು  ತೋಳ್ಗಳನಗಲಿಸಿ ಕಾದಿತ್ತು! ಮೈ ಮರಗಟ್ಟಿತು ಥರಥರಗುಟ್ಟಿತು ಮುಂದಿರುವಾಕೃತಿಯನು ನೆನೆದು, ಕೆಚ್ಚೆದೆಯಿಂದಲಿ ಕೈಲಾದುದ ತಾ- ನೆಸಗುವ ನಿಶ್ಚಯ ಪುಟ್ಟನದು. ತನ್ನೆಲ್ಲಳವನು ಕೂಡಿಸಿ ನಡೆದನು ಹುಡುಗನು ಬೇತಾಳದ ಕಡೆಗೆ, ಮಬ್ಬಿನಿರುಳಿನಲಿ ತವಕದಿ ಚಲಿಸುತ ಬೀರಿದ ನೋಟವನದರೆಡೆಗೆ. ಹತ್ತಿರವಾಗಿರೆ ಭೂತಾಕಾರವು ಭಯವದು ಕಣ್ಮರೆಯಾಗಿತ್ತು, ತಟ್ಟುತ ಕೈಗಳ ಪುಟ್ಟನು ನಕ್ಕನು ಹೊಟ್ಟೆಯು ಹುಣ್ಣಾಗುವವರೆಗೂ! ಕೈಮರವಿದ್ದಿತು ಭೂತವದಲ್ಲವೊ, ನೆರವಿಗೆ ದಾರಿಯ ಹೋಕರಿಗೆ! ಕತ್ತಲ ಮಾಯೆಯು ಕಳೆದಿರೆ ಬೆರಗಿನ  ನಿಜವದು ಕಂಡಿತು ಪುಟ್ಟನಿಗೆ. ಹೊಸತೊಂದುತ್ತಮ ಪಾಠವ ಕಲಿತೆನು  ಸಂಶಯವಿಲ್ಲೆಂದನ...

ಹಿಂಜರಿಕೆ

Image
 Kannada Translation of Robert Frost's poem "Reluctance": ಹಿಂಜರಿಕೆ ಕಾಡುಗಳಲಡ್ಡಾಡಿ ಬಯಲುಗಳಲೋಡಾಡಿ  ಗೋಡೆಗಳ ಹಾರುತ್ತಲಲೆದಿದ್ದೆ ನಾನು, ಕೋಡುಗಲ್ಲನು ಹತ್ತಿ ಜಗವನವಲೋಕಿಸುತ  ಮೂಡುಪಡುಗಳ ಕಂಡು ಬಂದೆ ಕೆಳಗಿಳಿದು.  ಬೀಡ ನಾ ಸೇರಿಹೆನು ಹೆದ್ದಾರಿಯನು ಹಿಡಿದು - ನೋಡದೋ, ಅಲ್ಲಿಗದು ಕೊನೆಯ ಕಂಡಿಹುದು! ತರಗುಗಳು ಚೆಲ್ಲಾಡಿ ಮಣ್ಣನಪ್ಪಿಹವೆಲ್ಲ  ಮರವು ಹಿಡಿದಿಟ್ಟ ಕೆಲವೆಲೆಗಳನು ಬಿಟ್ಟು, ತೊರೆವುದವುಗಳನು ತಾನೊಂದನೊಂದನೆ ಕಳಚಿ ಬರಡಾಗಿ ತರುವು ತಾ, ಹೆರರು ನಿದ್ರಿಸಿರೆ. ಹರಡಿರುವ ಹಿಮದೊಳಗೆ ಸೇರುವವು ತರಗುಗಳು ಕರಗುತ್ತ ಮುರಮುರನೆ ನವುರಾಗಿ ದನಿಸಿ. ಕೊಳೆತೆಲೆಗಳೆಡೆಗೆಡೆಗೆ ಗುಪ್ಪೆಯಲಿ ಕದಲದೆಯೆ  ಕುಳಿತಿಹವು, ಅತ್ತಿತ್ತ ಚಲಿಸದೆಯೆ ನೆಲದಿ. ಅಳಿದಿಹುದು ನಂದಿಹುದು ಆ ಕೊನೆಯ ಸೇವಂತಿ, ಬಳಲಿ ಮಲ್ಲೆಯ ದಳಗಳುದುರಿ ಹೋಗಿಹವು. ಕಳವಳಿಸಿ ಗುಂಡಿಗೆಯು ಮುಂದಿನದನರಸುತಿರೆ ಕೇಳಿಹವು ಹೆಜ್ಜೆಗಳು - "ಮತ್ತೆತ್ತ ನಡೆವೆ?" ಹರಿವ ನೀರಿನ ಸೆಳವಿನೊಳು ತೇಲಿ ಹೋಗುವುದು  ಎರಡು ಬಗೆದಂತೆನಿಸದೇನು ನರಮನಕೆ? ಅರಿವಿರಲು ಸರಿತಪ್ಪುಗಳ ತೆಳ್ಪು ಬಲಿತಿರಲು  ಕರವ ಜೋಡಿಸಿ ಮಣಿಯಲೆಂತು ಹಿಂಜರಿಕೆ? ಕರಗಿ ಹೋಗಿರೆ ನಲುಮೆ, ಋತುವು ಕೊನೆಗಾಣುತಿರೆ ಶರಣಾಗಿ ಜರುಗಿದುದನೊಪ್ಪುವುದಕಳವೆ? Reluctance Out through the fields and the woods    And over the walls I have wen...

ಸೋಽಹಂ

Image
Kannada translation of Kahlil Gibran's poem, "Fear": ಸೋಽಹಂ ಸಾಗರನ ಸೇರುವೆಡೆ ಸರಿತೆಗಿದೆ ದುಮ್ಮಾನ ಹೋಗಲೇತಕೆ ಮುಂದಕೆನಿಸುತಿಹ ದಿಗಿಲು. ಅಲೆಯಾಗಿ ಮರಳಿಹುದು ಸುಳಿದ ಹಾದಿಯ ನೆನಪು ಮಲೆಯ ಕುಡಿಯಿಂದ ತಾ ಭೋರ್ಗರೆದ ಹುರುಪು, ಹಲವು ಕಾನುಗಳಾಗಿ ಬಳಸಿ ಬಂದಿಹ ಹರಿವು, ಸೆಲೆಯಾಗಿ ಕೊಪ್ಪಗಳ ಸಲಹಿದ್ದ ಕುರುಹು. ಸಾಗರನು ಮುಂದಿಹನು, ಓಘದಲಿ ವಿಸ್ತರನು - ಸರಿತೆಯವನೊಳು ಲೀನಳಾಗಬೇಕು, ಮರೆತು ತನ್ನಿರುವಿಕೆಯ, ಕರಗಬೇಕು. ನಿರ್ವಾಹ ಬೇರಿಲ್ಲ ನಿರ್ವಾಣವವನಲ್ಲೆ, ಸಾಗಲಾರಳು ಸರಿತೆ ತಾನು ಹಿಂದಿರುಗಿ. ಹೋಗಲನುವಿರದಲ್ಲ ಯಾರಿಗೂ ಮರಳಿ! ಅರಿದು ಹಿಂದಿರುಗುವುದು ಈ ಜಗತ್ಸೃಷ್ಟಿಯಲಿ - ಸರಿತೆ ಭೀತಿಯನು ಬದಿಗಿರಿಸಬೇಕು, ನೆರೆದಿರುವ ಸಾಗರನ ಕೂಡಬೇಕು. ಸಾಗರನ ಸೇರುತಿರಲಂಜಿಕೆಯು ನೀಗುವುದು ಯೋಗವೆಂಬುದರರಿವು ಸರಿತೆಗಾಗುವುದು - ತಾನಳಿದು ಸಾಗರನ ಸೇರುತಿಹುದಲ್ಲವಿದು, ತಾನೆ ಸಾಗರನಾಗುತಿಹೆನೆಂಬ ತಿಳಿವು! - ವೆಂಕಟೇಶಪ್ರಸನ್ನ The original by Kahlil Gibran: Fear It is said that before entering the sea
 a river trembles with fear. She looks back at the path she has traveled,
 from the peaks of the mountains, 
the long winding road crossing forests and villages. And in front of her,
 she sees an ocean so vast,
 that to enter
there seems nothi...

ದೇವರ ತೋಟ

Image
 Kannada Translation of Robert Frost's poem "God's Garden" ದೇವರ ತೋಟ ದೇವರು ಸುಂದರ ತೋಟವನೊಂದನು ಮಾಡುತ ಹೂಗಿಡ ಹರಹಿದನು; ದಾರಿಯನೊಂದನು ಚಿಕ್ಕದು ಚೊಕ್ಕದು ಅವುಗಳ ನಡುವೆಯೆ ತೋರಿದನು. ಈ ಸುಂದರಬನದೊಳು ಜೀವಿಸಲೆನೆ ಮನುಕುಲವನು ತಾ ಕರೆಸಿದನು, ಇಂತೆಂದನು - "ಓ ನನ್ನಯ ಮಕ್ಕಳೆ, ಚಂದದಲರುಗಳ ನೀಡಿಹೆನು, ಲತೆಗಳನೋರಣಗೊಳಿಸುತಲರಳಿಯ ಪೋಷಿಸಿ ಹೂಗಳನುಪಚರಿಸಿ! ಹಾದಿಗೆ ತೆರಪಿರುವಂತೆಯೆ ಬಿಟ್ಟರೆ ನಿಮ್ಮಯ ಮನೆಯದೊ! ಕಾಣುವಿರಿ" ಹೊಸತೊಬ್ಬನು ಧಣಿ ಬಂದನು ನಂತರ, ಮನುಕುಲದೆಡೆಗವಗೊಲವಿಲ್ಲ, ಪಥವನೆ ಮುಚ್ಚುವ ಪರಿಯಲಿ ಹೊನ್ನಿನ ಹೂಗಳ ಬೆಳೆಸುತ ಸೆಳೆದಿದ್ದ. ಹೊಳೆಯುವ ಹೂಗಳ ಕಂಡಿತು ಮನುಕುಲ, ಥಳಥಳಿಸಿದವವು ಬೆಳಗಿನಲಿ! ಲೋಭದ ಮುಳ್ಳುಗಳಿದ್ದವು ಮರೆಯಲಿ ನಂಜನು ಸೂಸಿದವಾಳದಲಿ! ದೂರಕೆ ದೂರಕೆ ಅಲೆದರು ಹಲವರು ಹೊನ್ನಿನ ಹೂಗಳಲೊಲವಿಟ್ಟು, ಬಾಳಿನಿರುಳಿನಲಿ ದಾರಿಯು ತಪ್ಪಿರೆ ತೊಳಲಾಡಿದರಲ ಗತಿಗೆಟ್ಟು! ಸೊಗಸಿನ ಮಾಯೆಯು ಕುರುಡಾಗಿಸುವುದು ಕೈವಶವಾಗದೆ ಎಚ್ಚರಿರು! ದೇವರು ಸೃಜಿಸಿದ ಬಾನೊಳು ಮಿನುಗುವ ತಾರೆಗಳತ್ತಲೆ ಗಮನವಿಡು. ಅಪ್ಪಟ ನಡೆಯಿಹ ಕೇಡನು ಬಯಸದ ದಾರಿಯ ತೋರುವ ಕೆಳೆಗಳವು, ತಪ್ಪಿದ ಹೆಜ್ಜೆಯ ನೀನಿಡುತಿರಲವು ಹಾದಿಗೆ ಮರಳಿಸಿ ಸಲಹುವುವು. ನೇಸರ ಬೆಳಗಿರೆ ದೇವರು ನೆಟ್ಟಿಹ ಹೂಗಿಡಗಳ ಕಾಪಿಡುತಲಿರು, ಸಗ್ಗವ ತೋರುವ ಹಾದಿಯ ತೆರಪಿಗೆ ಬೆವರನು ಹರಿಸುತ ದುಡಿಯುತಿರು! - ವೆಂಕಟೇಶಪ್ರಸನ್ನ The or...