Posts

Showing posts with the label Temple

A Trip to Adi Badri and Sarasvati Udgam Sthal, Haryana

Image
A detailed write up will follow, but here are some pictures from Adi Badri, Haryana, from a visit in October 2018. This place is home to ancient Badrinath Vishnu and Kedarnath Shiva temples, as well as the place believed to be the birth place of River Sarasvati . Some clicks of the picturesque Adi Badri Pond : The green-filled path leading to Sarasvati Udgam Sthal : Sarasvati trickles through and falls on the Shiva Linga placed  here: The Somb River , a tributary of Yamuna that flows through Adi Badri, is believed to trace the same course as the River Sarasvati of the Vedic times: Beautiful crape jasmine (ಕನ್ನಡ: ನಂದಿಬಟ್ಟಲು) flowering at the feet of Sarasvati river birth: Initial steps to climb to the Adi Kedarnath Temple : And the last few steps to the temple: The main temple of Adi Kedarnath : The Gaushala maintained at Adi Kedarnath Temple premises: Adi Badrinath Temple  and it's steps as seen f...

ಗಡಿನಾಡ ಬೇಲೂರು ಖಿದ್ರಾಪುರ

Image
ಕರ್ನಾಟಕದಲ್ಲಿ ಶಿಲ್ಪಕಲಾ ಸೌಂದರ್ಯವನ್ನು ಉತ್ತುಂಗಕ್ಕೇರಿಸಿರುವ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನೇ ಹೋಲುವ ದೇಗುಲವೊಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಇದೆಯೆಂದರೆ ಯಾರಿಗೇ ಆದರೂ ಅಚ್ಚರಿಯಾಗದಿರದು. ಹೌದು, ಕೊಲ್ಹಾಪುರ ಜಿಲ್ಲೆಗೆ ಸೇರಿದ ಶಿರೋಳ ತಾಲ್ಲೂಕಿನ ಖಿದ್ರಾಪುರ ಎಂಬ ಸಣ್ಣ ಹಳ್ಳಿಯ "ಕೋಪೇಶ್ವರ" ಶಿವ ದೇವಾಲಯವೇ ಆ ಸ್ಮಾರಕ. ಕೃಷ್ಣಾ ನದಿಯ ದಡದಲ್ಲಿರುವ ಖಿದ್ರಾಪುರ ಕರ್ನಾಟಕಕ್ಕೆ ಅಂಟಿಕೊಂಡಂತಿರುವ ಮಹಾರಾಷ್ಟ್ರದ ಒಂದು ಹಳ್ಳಿ. ವಾಸ್ತವವಾಗಿ ಈ ಊರಿನಲ್ಲಿ ಹರಿಯುವ ಕೃಷ್ಣಾ ನದಿಯ ಒಂದು ದಡ ಮಹಾರಾಷ್ಟ್ರಕ್ಕೆ ಸೇರಿದರೆ ಮತ್ತೊಂದು ದಡ ಕರ್ನಾಟಕಕ್ಕೆ ಸೇರುತ್ತದೆ. ಹತ್ತಿರದ ಊರುಗಳಿಂದ ಎರಡೂ ರಾಜ್ಯದ ಭಕ್ತರು ಈ ದೇಗುಲಕ್ಕೆ ಹೋಗುತ್ತಾರೆ. ಶಿವರಾತ್ರಿಯ ಸಮಯದಲ್ಲಿ ಈ ದೇಗುಲ ವಿಶೇಷ ಪೂಜೆಗಳಿಂದ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತದೆ.   ಚಿತ್ರ ೧: ಕೋಪೇಶ್ವರ ಶಿವ ದೇವಾಲಯ: ಹಿಂಭಾಗದಿಂದ ಕಾಣಸಿಗುವ ಭವ್ಯ ನೋಟ ಸುತ್ತಲಿನ ಕೆಲವು ಊರುಗಳನ್ನು ಬಿಟ್ಟರೆ ಹೆಚ್ಚು ಜನರಿಗೆ ಮನೋಹರ ಶಿಲ್ಪಕಲೆಯ ಬೀಡಾದ ಖಿದ್ರಾಪುರದ ಕೋಪೇಶ್ವರ ದೇವಾಲಯದ ಬಗ್ಗೆ ತಿಳಿದಿರುವುದು ಕಡಿಮೆ. ಈ ದೇವಾಲಯವನ್ನು ಯಾರು ಯಾವಾಗ ಕಟ್ಟಿಸಿದರೆಂಬ ಸಂಪೂರ್ಣ ಮಾಹಿತಿ ಇಲ್ಲವಾದರೂ, ದೊರೆತಿರುವ ಶಾಸನಗಳ ಪ್ರಕಾರ ೭ನೇ ಶತಮಾನದಲ್ಲಿಯೇ ಇಲ್ಲಿ ಬಾದಾಮಿಯ ಚಾಲುಕ್ಯರು ದೇವಾಲಯ ಕಟ್ಟಿಸುವ ಪ್ರಯತ್ನಗಳನ್ನು ಮಾಡಿರುವುದು ಗೋಚ...

ನಾಶಿಕ್ - ಇತಿಹಾಸ, ಪುರಾಣ ಮತ್ತು ವಾಸ್ತುಶಿಲ್ಪ

Image
2015 ಜುಲೈ ತಿಂಗಳು ಬಂತೆಂದರೆ ಭಾರತದ ನಾಲ್ಕು ಪವಿತ್ರ ಯಾತ್ರಾಸ್ಥಳಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮಹಾರಾಷ್ಟ್ರದ ನಾಶಿಕ್‍ನಲ್ಲಿ ಮತ್ತೆ ಮೇಳೈಸುತ್ತದೆ. ಒಂದು ವರ್ಷಕ್ಕೂ ಮೇಲ್ಪಟ್ಟು, ಅಂದರೆ ೨೦೧೬ರ ಆಗಸ್ಟ್ ತಿಂಗಳವರೆಗೂ ಶಾಹಿ ಸ್ನಾನಗಳು, ಪವಿತ್ರ ಪೂಜೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ನಗರವು ಜನವರಿಯಿಂದಲೇ ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ ಎಂಬುದು ನಾಶಿಕ್‍ಗೆ ಈಚೆಗೆ ಭೇಟಿ ಕೊಟ್ಟ ಎಲ್ಲರಿಗೂ ಸುಲಭದಲ್ಲಿ ವೇದ್ಯವಾಗುತ್ತದೆ. ನಗರದೊಳಗಿನ ಮತ್ತು ರಾಜ್ಯದ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ ಒಂದೆಡೆ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಬರುವ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನಗರದುದ್ದಗಲಕ್ಕೂ ಮತ್ತು ನಾಶಿಕದಿಂದ ತ್ರ್ಯಂಬಕೇಶ್ವರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ವಸತಿಗೃಹಗಳ ಮತ್ತು ಧರ್ಮಛತ್ರಗಳ ಸಮುಚ್ಚಯಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಮಹಾಕುಂಭಮೇಳ ನಡೆಯುವ ಇತರ ಮೂರು ಸ್ಥಳಗಳಾದ ಹರಿದ್ವಾರ, ಪ್ರಯಾಗ ಮತ್ತು ಉಜ್ಜೈನಿಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಿಗೆ ಇದ್ದುದರಲ್ಲಿ ಹತ್ತಿರವಾಗಿರುವ ನಾಶಿಕ್‍ಗೆ ರಸ್ತೆ ಮತ್ತು ರೈಲು ಸಂಪರ್ಕಗಳೆರಡೂ ಸಮರ್ಪಕವಾಗಿದ್ದು, ಕುಂಭಮೇಳವನ್ನು ನೋಡಿ ಕಣ್ತುಂಬಿಕೊಳ್ಳುವ ಮತ್ತು ಭಾಗವಹಿಸಿ ಪುನೀತರಾಗುವ ಆಸೆಯಿದ್ದವರಿಗೆ ಮುಂದಿನ ಒಂದು ವರ್ಷ ಪ್ರವಾಸೀ ತಾಣವಾಗಿ ಆಕರ್ಷಿಸುವ ಸಾ...