Posts

Showing posts with the label Writing

"ಜ್ಞಾನಲೋಕ"ವೆಂಬ ಮರೀಚಿಕೆ, ಸಡಗರದ ಕೈಬರಹ ಪತ್ರಿಕೆ

ಇಂದಿಗೆ ಸರಿಯಾಗಿ ೨೦ ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿದ್ದಾಗ ನಿಂತುಹೋದದ್ದೊಂದು ಖಯಾಲಿಯನ್ನು ಮತ್ತೇಕೆ ಆರಂಭಿಸಬಾರದೆಂಬ ಮನಸ್ಸು ನನಗೂ ನನ್ನ ಸ್ನೇಹಿತ ಶಿವಪ್ರಸಾದನಿಗೂ ಇಂದು ಬೆಳಿಗಿನ ಜಾವದ ನಡಿಗೆಯ ಸಮಯದಲ್ಲಿ ಒಟ್ಟಿಗೇ ಬಂದದ್ದು ಆಶ್ಚರ್ಯಕರವೇ. ೧೪ ಏಪ್ರಿಲ್ ೧೯೯೯ ರ ದಿನ ನಾವಿಬ್ಬರೂ ಕೈಜೋಡಿಸಿ ಆರಂಭಿಸಿದ್ದ ಕೈಬರಹ ಪತ್ರಿಕೆ " ಜ್ಞಾನಲೋಕ "ದ ಕೊನೆಯ ಪ್ರತಿ ಪ್ರಕಟಗೊಂಡ ದಿನ. ಅಂದು ಅಂಬೇಡ್ಕರ್ ಜಯಂತಿಯೆಂದು ಶಿವಪ್ರಸಾದನು ಅಂಬೇಡ್ಕರರ ಚಿತ್ರವೊಂದನ್ನೂ ಬಿಡಿಸಿ ಒಂದೇ ಹಾಳೆಯ ಪೇಪರನ್ನು ಚೆನ್ನಾಗಿಯೇ ತುಂಬಿಸಿದ್ದ. ಆ ಪತ್ರಿಕೆ ಅಂದು ದಿನಪತ್ರಿಕೆಯಾಗಿತ್ತು. ದಿನಕ್ಕೆ ಎರಡು ಪ್ರತಿಗಳನ್ನು ಹೊರತರುತ್ತಿದ್ದೆವು. ಒಂದು ದಿನ ನಾನು ಪತ್ರಿಕೆ ಬರೆದರೆ ಮಾರನೆಯ ದಿನ ಅವನು. ಅದರ ನಂತರ ಮತ್ತೆ ನಾನು. ಹಾಗೆ. ಯಾರು ಬರೆದರೂ ಕೆಳಗೊಂದು ಕಾರ್ಬನ್ ಶೀಟ್ ಇಟ್ಟುಕೊಂಡು ಬರೆಯುವುದು. ಅದೇ ಎರಡನೇ ಪ್ರತಿ. ನಾನು ಬರೆದ ದಿನ ಆ ಕಾರ್ಬನ್ ಕಾಪಿ ಪ್ರತಿಯನ್ನು ಶಿವಪ್ರಸಾದನಿಗೆ ಕೊಡುವುದು, ಅವನು ಬರೆದ ದಿನ ಅವನು ನನಗೆ ಕೊಡುತ್ತಿದ್ದ. ಅಷ್ಟೇ. ಅದರಲ್ಲೇ ಒಂದು ಸಂತೃಪ್ತಿ. ಯಾರಿಗೇನು ಅದರ ಬಗ್ಗೆ ನಾವು ಹೇಳಿಯೂ ಇರಲಿಲ್ಲ.    ಇಷ್ಟೆಲ್ಲಾ ಪ್ರಚಾರ ಕೊಡುವುದು ನೋಡಿದರೆ ಓದುಗರು ನಾವೇನೋ ಆ ಪತ್ರಿಕೆಯನ್ನು ಹಲವು ವರ್ಷಗಳ ಕಾಲ ನಡೆಸಿದೆವೆಂದುಕೊಳ್ಳಬಹುದು. ಆದರೆ ನಾವು ಹೊರತಂದದ್ದು ಕೇವಲ ಐದೋ ಆರೋ ಸಂಚಿಕೆಗಳನ್ನು! ನಮ್ಮಿಬ್ಬರಿಗೂ ಆಗ...