Posts

Showing posts with the label History

Jhansi Rani Lakshmi Bai: Manikarnika: Through Murals at her Memorial

Image
A brief history of Jhansi Rani Lakshmi Bai, Manikarnika, through the murals of her memorial at Varanasi, pictures from the Varanasi visit of November 2018: Road leading to the Jhansi Rani Lakshmi Bai Memorial near Assi Ghat, Varanasi Entrance of the memorial... Details about the memorial and about Rani Lakshmi Bai: The majestic statue of the Queen of Jhansi: Manikarnika, being cared by her parents, Moropant and Bhagirathi Bai: Manikarnika playing on the banks of river Ganga at the Ghats of Varanasi: Moropant moves to Bithoor with little daughter Manikarnika after his wife passes away: Manikarnika gets special affection and attention from Peshwa Bajirao II and gets to learn the art of warfare from Tatya Tope and others: Manikarnika marries Gangadhar Rao, King of Jhansi, and becomes Lakshmi Bai: King Gangadhar Rao and Queen Lakshmi Bai of Jhansi: Gangadhar Rao and Lakshmi Bai adopt Damodar Rao as the heir to the Jhansi thr...

ನಾಶಿಕ್ - ಇತಿಹಾಸ, ಪುರಾಣ ಮತ್ತು ವಾಸ್ತುಶಿಲ್ಪ

Image
2015 ಜುಲೈ ತಿಂಗಳು ಬಂತೆಂದರೆ ಭಾರತದ ನಾಲ್ಕು ಪವಿತ್ರ ಯಾತ್ರಾಸ್ಥಳಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮಹಾರಾಷ್ಟ್ರದ ನಾಶಿಕ್‍ನಲ್ಲಿ ಮತ್ತೆ ಮೇಳೈಸುತ್ತದೆ. ಒಂದು ವರ್ಷಕ್ಕೂ ಮೇಲ್ಪಟ್ಟು, ಅಂದರೆ ೨೦೧೬ರ ಆಗಸ್ಟ್ ತಿಂಗಳವರೆಗೂ ಶಾಹಿ ಸ್ನಾನಗಳು, ಪವಿತ್ರ ಪೂಜೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ನಗರವು ಜನವರಿಯಿಂದಲೇ ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ ಎಂಬುದು ನಾಶಿಕ್‍ಗೆ ಈಚೆಗೆ ಭೇಟಿ ಕೊಟ್ಟ ಎಲ್ಲರಿಗೂ ಸುಲಭದಲ್ಲಿ ವೇದ್ಯವಾಗುತ್ತದೆ. ನಗರದೊಳಗಿನ ಮತ್ತು ರಾಜ್ಯದ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ ಒಂದೆಡೆ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಬರುವ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನಗರದುದ್ದಗಲಕ್ಕೂ ಮತ್ತು ನಾಶಿಕದಿಂದ ತ್ರ್ಯಂಬಕೇಶ್ವರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ವಸತಿಗೃಹಗಳ ಮತ್ತು ಧರ್ಮಛತ್ರಗಳ ಸಮುಚ್ಚಯಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಮಹಾಕುಂಭಮೇಳ ನಡೆಯುವ ಇತರ ಮೂರು ಸ್ಥಳಗಳಾದ ಹರಿದ್ವಾರ, ಪ್ರಯಾಗ ಮತ್ತು ಉಜ್ಜೈನಿಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಿಗೆ ಇದ್ದುದರಲ್ಲಿ ಹತ್ತಿರವಾಗಿರುವ ನಾಶಿಕ್‍ಗೆ ರಸ್ತೆ ಮತ್ತು ರೈಲು ಸಂಪರ್ಕಗಳೆರಡೂ ಸಮರ್ಪಕವಾಗಿದ್ದು, ಕುಂಭಮೇಳವನ್ನು ನೋಡಿ ಕಣ್ತುಂಬಿಕೊಳ್ಳುವ ಮತ್ತು ಭಾಗವಹಿಸಿ ಪುನೀತರಾಗುವ ಆಸೆಯಿದ್ದವರಿಗೆ ಮುಂದಿನ ಒಂದು ವರ್ಷ ಪ್ರವಾಸೀ ತಾಣವಾಗಿ ಆಕರ್ಷಿಸುವ ಸಾ...

ಡಂಬಳ: ಮತ್ತೆ ಮತ್ತೆ ನೋಡಬೇಕೆನಿಸುವ ಹಂಬಲ

Image
ಹನ್ನೊಂದು ಮತ್ತೆ ಹನ್ನೆರಡನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ಮತ್ತು ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪದ ಪರಾಕಾಷ್ಠೆಯನ್ನು ಪ್ರದರ್ಶಿಸುವ ಹಲವು ದೇಗುಲಗಳಿಗೆ ಗದಗ ಜಿಲ್ಲೆ ಇಂದು ತವರೂರಾಗಿದೆ . ಇವುಗಳಲ್ಲಿ ಅತ್ಯಂತ ಸುಂದರವಾಗಿದ್ದೂ ಸಹ ಎಲೆಮರೆಯ ಕಾಯಾಗಿರುವ ಡಂಬಳ ದ ದೊಡ್ಡಬಸಪ್ಪ ದೇವಾಲಯವೂ ಒಂದು . ಡಂಬಳ ಗದಗಿನಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರವಿದ್ದು , ಮುಂಡರಗಿ ತಾಲ್ಲೂಕಿಗೆ ಸೇರಿರುವ ಒಂದು ಹಳ್ಳಿ . ಆದರೆ ಇದೇ ಡಂಬಳ ಚಾಲುಕ್ಯರ ಕಾಲಕ್ಕೆ ಮಾಸವಾಡಿನಾಡೆಂದು ಕರೆಸಿಕೊಂಡ ಪ್ರದೇಶದ ರಾಜಧಾನಿಯಾಗಿ ಮೆರೆದ ಧರ್ಮಪುರ , ಧರ್ಮೋಳ , ಧರ್ಮವೊಳಲ್ ಎಂದೆಲ್ಲಾ ಹೆಸರು ಮಾಡಿದ್ದ ಮಹಾಪಟ್ಟಣ . ಆಗಿನ ಕಾಲದ ಧಾರ್ಮಿಕ ಅನ್ಯೋನ್ಯತೆಗೆ ಹಿಡಿದ ಕನ್ನಡಿಯಂತಿದ್ದ ಡಂಬಳದ ಶಿಲ್ಪಕಲಾ ಮತ್ತು ಐತಿಹಾಸಿಕ ಹೆಚ್ಚುಗಾರಿಕೆನ್ನು ಬಿಂಬಿಸುವ ಪ್ರಯತ್ನ ಈ ಲೇಖನ . ಚಿತ್ರ ೧. ದೂರದಿಂದಲೇ ಕೈಬೀಸಿ ಕರೆಯುವ ದೊಡ್ಡಬಸಪ್ಪ ದೇವಾಲಯ ಡಂಬಳ ಮತ್ತು ಆಸುಪಾಸಿನಲ್ಲಿ ದೊರಕಿರುವ ಶಾಸನಗಳ ಪ್ರಕಾರ ಹಿಂದೆ ಈ ಹಳ್ಳಿ ಬೌದ್ಧ , ಜೈನ ಮತ್ತು ಹಿಂದೂ ಧರ್ಮಗಳ ಪೋಷಣೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿರುವುದು ಕಂಡುಬರುತ್ತದೆ . ಕ್ರಿ.ಶ. 1059 ರ ಶಾಸನದಿಂದಾಗಿ ಡಂಬಳದಲ್ಲಿ ಮೊದಲೇ ಉಪಸ್ಥಿತವಿದ್ದ ಜಿನಾಲಯವೊಂದಕ್...