Posts

Showing posts from June, 2017

ನಾಶಿಕ್ - ಇತಿಹಾಸ, ಪುರಾಣ ಮತ್ತು ವಾಸ್ತುಶಿಲ್ಪ

Image
2015 ಜುಲೈ ತಿಂಗಳು ಬಂತೆಂದರೆ ಭಾರತದ ನಾಲ್ಕು ಪವಿತ್ರ ಯಾತ್ರಾಸ್ಥಳಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮಹಾರಾಷ್ಟ್ರದ ನಾಶಿಕ್‍ನಲ್ಲಿ ಮತ್ತೆ ಮೇಳೈಸುತ್ತದೆ. ಒಂದು ವರ್ಷಕ್ಕೂ ಮೇಲ್ಪಟ್ಟು, ಅಂದರೆ ೨೦೧೬ರ ಆಗಸ್ಟ್ ತಿಂಗಳವರೆಗೂ ಶಾಹಿ ಸ್ನಾನಗಳು, ಪವಿತ್ರ ಪೂಜೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ನಗರವು ಜನವರಿಯಿಂದಲೇ ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ ಎಂಬುದು ನಾಶಿಕ್‍ಗೆ ಈಚೆಗೆ ಭೇಟಿ ಕೊಟ್ಟ ಎಲ್ಲರಿಗೂ ಸುಲಭದಲ್ಲಿ ವೇದ್ಯವಾಗುತ್ತದೆ. ನಗರದೊಳಗಿನ ಮತ್ತು ರಾಜ್ಯದ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ ಒಂದೆಡೆ ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಬರುವ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನಗರದುದ್ದಗಲಕ್ಕೂ ಮತ್ತು ನಾಶಿಕದಿಂದ ತ್ರ್ಯಂಬಕೇಶ್ವರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ವಸತಿಗೃಹಗಳ ಮತ್ತು ಧರ್ಮಛತ್ರಗಳ ಸಮುಚ್ಚಯಗಳ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಮಹಾಕುಂಭಮೇಳ ನಡೆಯುವ ಇತರ ಮೂರು ಸ್ಥಳಗಳಾದ ಹರಿದ್ವಾರ, ಪ್ರಯಾಗ ಮತ್ತು ಉಜ್ಜೈನಿಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರಿಗೆ ಇದ್ದುದರಲ್ಲಿ ಹತ್ತಿರವಾಗಿರುವ ನಾಶಿಕ್‍ಗೆ ರಸ್ತೆ ಮತ್ತು ರೈಲು ಸಂಪರ್ಕಗಳೆರಡೂ ಸಮರ್ಪಕವಾಗಿದ್ದು, ಕುಂಭಮೇಳವನ್ನು ನೋಡಿ ಕಣ್ತುಂಬಿಕೊಳ್ಳುವ ಮತ್ತು ಭಾಗವಹಿಸಿ ಪುನೀತರಾಗುವ ಆಸೆಯಿದ್ದವರಿಗೆ ಮುಂದಿನ ಒಂದು ವರ್ಷ ಪ್ರವಾಸೀ ತಾಣವಾಗಿ ಆಕರ್ಷಿಸುವ ಸಾ...

ರಾಮ ಗೋವಿಂದ ಹರೇ - ಕನಕದಾಸರ ದೇವರನಾಮ

Image
ಕನಕದಾಸರ ಈ ದೇವರನಾಮ ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುವಂತಾಗಿ ಕಳೆದ ಕೆಲವು ದಿನಗಳಲ್ಲಿ ಹಲವು ಬಾರಿ ಕೇಳಿದ್ದಾಗಿದೆ. ಅಷ್ಟು ಸುಂದರ ಸಾಹಿತ್ಯ. ಅಷ್ಟೇ ಭಕ್ತಿಪರವಶವಾಗುವಂತಹ ಗಾಯನ ಕುರುಡಿ ವೆಂಕಣ್ಣಾಚಾರ್ ಮತ್ತು ಅವರ ಮಗ ಕೆ. ವಿ. ನಂದಕುಮಾರ್ ಅವರಿಂದ. ಆಹಿರ್ ಭೈರವ್  ರಾಗವೂ ತನ್ನ ಪ್ರಭಾವವನ್ನು ಸಂಪೂರ್ಣವಾಗಿ ಬೀರುತ್ತದೆ... ರಾಮ ಗೋವಿಂದ ಹರೇ... ಕೃಷ್ಣಾ... ॥ ಪ ॥ ದಾಮೋದರ ಹರಿ ವಿಷ್ಣು ಮುಕುಂದಾ... ॥ ಅ ॥ ಮಚ್ಚಾವತಾರದೊಳಾಡಿದನೇ ಮಂದರಾಚಲ ಬೆನ್ನೊಳಗಾಂತವನೇ ಅಚ್ಚಸೂಕರನಾಗಿ ಬಾಳಿದನೇ ಮದ ಹೆಚ್ಚೆ ಹಿರಣ್ಯಕನ ಸೀಳಿದನೇ ॥ ೧ ॥ ಬಲಿಯೊಳು ದಾನವ ಬೇಡಿದನೇ ಕ್ಷತ್ರಕುಲವ ಬಿಡದೆ ಕ್ಷಯ ಮಾಡಿದನೇ ಜಲನಿಧಿಗೆ ಬಿಲ್ಲನ್ನು ಹೂಡಿದನೇ ಕಾಮಕ್ಕೊಲಿದು ಗೊಲ್ಲತಿಯೊಳಗಾಡಿದನೇ ॥ ೨ ॥ ಸಾಧಿಸಿ ತ್ರಿಪುರರ ಗೆಲಿದವನೇ ಪ್ರತಿಪಾದಿಸಿ ಹಯವೇರಿ ನಲಿದವನೇ ಭೇದಿಸಿ ವಿಶ್ವವ ಗೆಲಿದವನೇ ಬಾಡದಾದಿಕೇಶವ ನಮಗೊಲಿದವನೇ ॥ ೩ ॥